ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ಕಲಘಟಗಿ: ತಾಲ್ಲೂಕಿನ ದ್ಯಾವನಕೊಂಡ ಗ್ರಾಮದ ರೈತನೋರ್ವ ಸಾಲಭಾದೆ ತಾಳಲಾರದೆ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಕಲಘಟಗಿ: ತಾಲ್ಲೂಕಿನ ದ್ಯಾವನಕೊಂಡ ಗ್ರಾಮದ ರೈತನೋರ್ವ ಸಾಲಭಾದೆ ತಾಳಲಾರದೆ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಗ್ರಾಮದ ರೈತರಾದ ಈರನಗೌಡ ಬಸನಗೌಡ ಹುಡೇದ (46) ಎಂಬುವವರೇ ಸೆ. 15 ರಿಂದ 18 ರ ನಡುವಿನ ಅವಧಿಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ರೈತನು ಸರ್ವೆ ನಂ: 102 ರ ಜಮೀನನ ಮೇಲೆ ಸೆಂಟ್ರಲ್ ಬ್ಯಾಂಕಿನಲ್ಲಿ 2 ಲಕ್ಷ ಬೆಳೆಸಾಲ ಹಾಗೂ ವಿವಿಧ ಕಡೆ ಕೈಗಡ ಸಾಲ ಮಾಡಿ ಮೆಕ್ಕೆಜೋಳ ಮತ್ತು ಭತ್ತ ಬೆಳೆದಿದ್ದು ಸರಿಯಾಗಿ ಮಳೆಯಾಗದೇ ಬೆಳೆ ಕುಂಟಿಗೊಂಡು ಮಾಡಿದ ಸಾಲ ತೀರಿಸಲಾಗದೇ ಜೀವನದಲ್ಲಿ ಮನನೊಂದು ಸಾವನೊಪ್ಪಿದ್ದಾನೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
ಗ್ರಾಮದ ರೈತರಾದ ಈರನಗೌಡ ಬಸನಗೌಡ ಹುಡೇದ (46) ಎಂಬುವವರೇ ಸೆ. 15 ರಿಂದ 18 ರ ನಡುವಿನ ಅವಧಿಯಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ರೈತನು ಸರ್ವೆ ನಂ: 102 ರ ಜಮೀನನ ಮೇಲೆ ಸೆಂಟ್ರಲ್ ಬ್ಯಾಂಕಿನಲ್ಲಿ 2 ಲಕ್ಷ ಬೆಳೆಸಾಲ ಹಾಗೂ ವಿವಿಧ ಕಡೆ ಕೈಗಡ ಸಾಲ ಮಾಡಿ ಮೆಕ್ಕೆಜೋಳ ಮತ್ತು ಭತ್ತ ಬೆಳೆದಿದ್ದು ಸರಿಯಾಗಿ ಮಳೆಯಾಗದೇ ಬೆಳೆ ಕುಂಟಿಗೊಂಡು ಮಾಡಿದ ಸಾಲ ತೀರಿಸಲಾಗದೇ ಜೀವನದಲ್ಲಿ ಮನನೊಂದು ಸಾವನೊಪ್ಪಿದ್ದಾನೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.