🔥 TRENDING Kerala HC summons top official over de... Jharkhand Emerges as Hub for Young Bat... India and France deepen space ties thr... BRS cadres douse Congress protest site... Odisha zoo rolls out special care for... Odisha CM Majhi Meets UAE Minister to...
10 Sep 2026
ગુજરાતી मराठी ਪੰਜਾਬੀ বাংলা

ದೇವದುರ್ಗ ಪಟ್ಟಣದಲ್ಲಿ ಆಟೋ ನಿಲುಗಡೆಗೆ ಜಾಗ ಕಲ್ಪಿಸಲು ಕರೆಮ್ಮ ಜಿ ನಾಯಕ ಮನವಿ

✍️ Reporter: MAHAMAD WALI QURESHI 🗓 09 Sep 2026, 11:16 AM 👁 22
Watch on: ▶️ YouTube
Share: 💬 WhatsApp 📘 Facebook 𝕏 Post
ದೇವದುರ್ಗ ಪಟ್ಟಣದಲ್ಲಿ ಆಟೋ ನಿಲುಗಡೆಗೆ ಜಾಗ ಕಲ್ಪಿಸಲು ಮನವಿ

ನೀಡ್ 24 ನ್ಯೂಸ್

ದೇವದುರ್ಗ ಪಟ್ಟಣದಲ್ಲಿ ಸಂಚರಿಸುವ ಆಟೋ ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸೂಕ್ತ ಆಟೋ ನಿಲ್ದಾಣಕ್ಕೆ ಜಾಗ ಕಲ್ಪಿಸಿಕೊಡುವಂತೆ ಕಲ್ಯಾಣ ಕರ್ನಾಟಕ ಶಂಕರನಾಗ್ ಆಟೋ ಚಾಲಕರ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ (ರಿ) ದೇವದುರ್ಗ ತಾಲೂಕು ಘಟಕದ ಪದಾಧಿಕಾರಿಗಳು ಶಾಸಕಿ ಕರೆಮ್ಮ ಜಿ. ನಾಯಕ ಅಮಗೆ ಮನವಿ ಸಲ್ಲಿಸಿದರು.

ದೇವದುರ್ಗ ಪಟ್ಟಣದಲ್ಲಿ ಸುಮಾರು 300ಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿವೆ. ಆದರೆ ಆಟೋಗಳನ್ನು ನಿಲುಗಡೆ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಚಾಲಕರು ಅನಿವಾರ್ಯವಾಗಿ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಪ್ರಮುಖ ಸ್ಥಳಗಳಲ್ಲಿ ಸಂಚಾರ ದಟ್ಟಣೆಯ ಉಂಟಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ

ಹೆಚ್.ಜೆಡ್.ಪಿ. ತಿಳಿಸಿದ್ದಾರೆ. ಪಟ್ಟಣದ ವೃತ್ತ, ಬಸವೇಶ್ವರ ವೃತ್ತ, ಮಿನಿ ವಿಧಾನಸೌಧದ ಮುಂಭಾಗ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಹಾಗೂ బాబు ಜಗಜೀವನ್‌ರಾಮ್ ವೃತ್ತ ಆಟೋ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಆಟೋ ಪ್ರತಿನಿತ್ಯ ನಿಲುಗಡೆ ಸಮಸ್ಯೆ ಎದುರಿಸುತ್ತಿದ್ದು, ಸಾರ್ವಜನಿಕರ ಸುಗಮ ಸಂಚಾರದ ಜೊತೆಗೆ ಚಾಲಕರ ಜೀವನೋಪಾಯದ ಹಿತದೃಷ್ಟಿಯಿಂದ ಪಟ್ಟಣದಲ್ಲಿ ಶಾಶ್ವತ ಆಟೋ ನಿಲ್ದಾಣಕ್ಕೆ ಸೂಕ್ತ ಸ್ಥಳ ಗುರುತಿಸಿ ಅಗತ್ಯ ಮೂಲಸೌಕರ್ಯ

ಕಲ್ಪಿಸಬೇಕು ಮಾಡಿದರು. ಎಂದು ಮನವಿ

ಈ ಕುರಿತು ಶಾಸಕಿ ಕರೆಮ್ಮ ಜಿ. ನಾಯಕ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರ ಕ್ರಮ ಕೈಗೊಂಡು ಆಟೋ ನಿಲ್ದಾಣಕ್ಕೆ ಜಾಗ ಕಲ್ಪಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು. ಈ ಸಂದರ್ಭದಲ್ಲಿ, ರಾಮಣ್ಣ ನಾಯಕ ಅಧ್ಯಕ್ಷರು, ಪರಿಶಿಷ್ಟ ಪಂಗಡ ವಿಭಾಗ ದೇವದುರ್ಗ ತಾಲೂಕ. ರಮೇಶ ರಾಮನಾಳ ಅಧ್ಯಕ್ಷರು. ಯುವ ಜನತಾದಳ ದೇವದುರ್ಗ. ಗೋವಿಂದರಾಜು ನಾಯಕ ವಕ್ತರಾರು ಅರಕೇರಾ, ಜೆಡಿಎಸ್‌ ತಾಲೂಕ ಮಹಾ ಪ್ರಧಾನ ಇತರ ಇದ್ದರು...
📲Get App