🔥 TRENDING Rahul Gandhi slams US incident of Indi... Karnataka High Court Rebukes Police fo... User Searches "Jallianwala Massacre" o... The Tribune reports rise in searches f... Pakistan suspends eight officials afte... FlyArystan Airbus A320 Catches Fire Du...
31 Aug 2026
ગુજરાતી मराठी ਪੰਜਾਬੀ বাংলা

ಪ್ರೊ. ಕೃಷ್ಣಪ್ಪ ಬಣದ ಸಂಘಟನೆ ಕುಂದುಕೊರತೆ ಸಭೆ

✍️ Reporter: Shivaraj G 🗓 31 Aug 2026, 03:47 AM 👁 26
Watch on: 📘 Facebook
Share: 💬 WhatsApp 📘 Facebook 𝕏 Post
ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರೊ. ಕೃಷ್ಣಪ್ಪ ಬಣದ ಸಂಘಟನೆಯ ವತಿಯಿಂದ ಸಂಘಟನೆಯ ಬಲವರ್ಧನೆ ಹಾಗೂ ಕುಂದುಕೊರತೆಗಳ ಕುರಿತು ಸಭೆ ನಡೆಸಲಾಯಿತು.

ಸಭೆಯಲ್ಲಿ ಸಂಘಟನೆಯ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿ, ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಂಘಟನೆಯಲ್ಲಿರುವ ಕುಂದುಕೊರತೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ದುರುಗೇಶ್ ಮತ್ತು ತೆಗ್ಗಿನಕೇರಿ ಕೊಟ್ರೇಶ್ ಅವರು ಮಾತನಾಡಿ, ಸಂಘಟನೆಯಲ್ಲಿರುವ ಕುಂದುಕೊರತೆಗಳನ್ನು ಸರಿಪಡಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಘಟನೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ತೆಗ್ಗಿನಕೇರಿ ಹನುಮಂತಪ್ಪ ವಕೀಲರು, ಕೊಟ್ಟೂರು ತಾಲೂಕು ಡಿಎಸ್ಎಸ್ ತಾಲೂಕು ಅಧ್ಯಕ್ಷರು ಬಣಕಾರ್ ಶಿವರಾಜ್, ಪ. ಪಂ ಮಾಜಿ ಸಾಯ್ಥಿ ಅಧ್ಯಕ್ಷರು ಬುಗ್ಗಳ್ಳಿ ಕೊಟ್ರೇಶ್, ಡಿ ಎಸ್ ಎಸ್ ಹಿರಿಯ ಮುಖಂಡರಗಳಾ ಟಿ. ಮೈಲಾಪ್ಪ, ರಾಂಪುರ ಅಮರೇಶ್, ರಾಮಣ್ಣ,ಟಿ. ಕರಿಸ್ವಾಮಿ, ಕೆ ರಮೇಶ್, ಜೋಳ ಕೂಡ್ಲಿಗಿ ಶಿವು, ಕಂದಗಲ್ಲು ಕೊಲ್ಲಾರಿ, ಜಿ ಕೊಟ್ರೇಶ್, ಮೈದೂರು ಪರಶುರಾಮ್, ಬಸವರಾಜ್, ಉಜ್ಜಿನಿ ಹೊನ್ನಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.
📲Get App